ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ನೊಂದಣಿ ಸಂಖ್ಯೆ 63/2000-2001 ದಿನಾಂಕ 27ನೇ ಏಪ್ರಿಲ್ 2000 ರಂದು ಅಸ್ತಿತ್ವದಲ್ಲಿ ಬಂದಿದ್ದು, ಸಮಾಜದ ಮುತ್ಸದ್ದಿಗಳಾದ ಶ್ರೀ ಹೆಚ್ ದೇವೇಂದ್ರಪ್ಪ, ಶ್ರೀ. ಶಿವಶರಣ ಬಾರಕೇರ, ಶ್ರೀ. ಶ್ರೀಕಂಠಪ್ಪ ಎಂ. ಎನ್, ಶ್ರೀ. ಕೆ ಆರ್. ಧರ್ಮಪ್ಪ, ಶ್ರೀ. ಎನ್. ಶ್ರೀನಿವಾಸಲು , ಶ್ರೀ. ಎಸ್ ವೈ . ಪಾಟೀಲ, ಶ್ರೀ. ಕೆ ಎನ್ ದೇವಪ್ಪ, ಶ್ರೀ. ಎಮ್ ಎಸ್ ಈಶ್ವರಿಕುಮಾರ, ಡಾ. ಹೆಚ್ ವೈ ಹರೀಶ, ಶ್ರೀ. ಅಂಬೋಜ್ ಎಸ್ ಎನ್, ಶ್ರೀ. ಚಂದ್ರಪ್ರಸಾದ್ ಇನ್ನೂ ಮುಂತಾದವರ ಮುಂದಾಳತ್ವದಲ್ಲಿ, ಸಮಾಜದ ಕಾಲಜಿ ಮತ್ತು ಮುಂದಾಲೋಚನೆಯಿಂದ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘ ಜನ್ಮ ತಾಳಿದ್ದು ಸಮಾಜದ ಮಾತೃಸಂಘವಾದ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ ಇದರ ಒಂದು ಘಟಕವಾಗಿ ಕೆಲಸ ನಿರ್ವಹಿಸುತ್ತಿದೆ. ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮತ್ತು ನಿರ್ವಹಿಸಿರುವ ಸಮಾಜದ ಎಲ್ಲ ಬಂಧುಗಳನ್ನು ಒಗ್ಗೊಡಿಸಿಕೊೆಯುವದರ ಜೊತೆಗೆ ಕೆಳಗಿನ ಉದ್ದೇಶಗಳನ್ನು ಒಳಗೊಂಡಿದೆ :